ನಿತ್ಯ ಹಸಿರು

ಪ್ರಿಯ ಸಖಿ,
ಮನುಷ್ಯನ ಬದುಕಿನಲ್ಲಿ ಯಾವುದು ನಿತ್ಯ ಹಸಿರಾಗಿರುತ್ತದೆ? ಮತ್ತೆ ಯಾವುದು ಬೇಗ ಬಾಡಿಹೋಗುತ್ತದೆ? ನಿನಗೆ ಗೊತ್ತೇ? ಚಿಂತಕ ಮುಸೋಲಿನಿ ಹೀಗೆ
ಹೇಳುತ್ತಾನೆ.
Beauty, Strength, Youth
are flowers but,
fading soon
duty, faith, love
are roots and
evergreen
ಸೌಂದರ್ಯ, ಶಕ್ತಿ ಮತ್ತು ಯೌವ್ವನ ಹೂವುಗಳಿದ್ದಂತೆ, ಆದರೆ ಬೇಗ ಬಾಡಿ ಹೋಗುತ್ತವೆ. ಕರ್ತವ್ಯ, ನಂಬಿಕೆ, ಶ್ರದ್ಧೆ, ಪ್ರೀತಿ ಬೇರುಗಳಿದ್ದಂತೆ. ಅವು ನಿತ್ಯ ಹಸಿರಾಗಿರುತ್ತವೆ.

ದಿನಕಳೆದಂತೆ ಕಳೆಗುಂದುವ ಅಲ್ಪಾಯುವಾದ ಸೌಂದರ್ಯ ಶಕ್ತಿ ಮತ್ತು ಯೌವನವನ್ನು ವೃದ್ಧಿಗೊಳಿಸುವತ್ತ ನಮ್ಮ ಗಮನವನ್ನು ಕೇಂದ್ರೀಕರಿಸಿದರೆ ಅದರಿಂದ ಪ್ರಯೋಜನವೇನೂ ಇಲ್ಲ. ಅದು ಸಮಯ ಕಳೆದಂತೆ ತನ್ನ ಬೆಲೆಯನ್ನು ಕಳೆದುಕೊಳ್ಳುತ್ತದೆ ಆದರೆ ಕರ್ತವ್ಯ, ಶ್ರದ್ಧೆ, ಪ್ರೀತಿ ಎಂಬ ಬೇರುಗಳನ್ನು ಗಟ್ಟಿಗೊಳಿಸುತ್ತಾ ಸಾಗಿದರೆ ಅದರಿಂದ ಬದುಕು ಸುಂದರವಾಗುತ್ತದೆ. ಜೊತೆಗೆ ಶಾಶ್ವತ ಆಂತರಿಕ ಬೆಳವಣಿಗೆಯೂ ಸಾಧ್ಯವಾಗುತ್ತದೆ. ತನ್ನ ಕರ್ತವ್ಯ, ಶ್ರದ್ಧೆ ಮತ್ತು ಪ್ರೀತಿಯಲ್ಲಿ ವಿಶ್ವಾಸವಿರಿಸಿರುವ ವ್ಯಕ್ತಿ ಸದಾ ಗೆಲ್ಲುತ್ತಲೇ ಹೋಗುತ್ತಾನೆ. ಅವನಿಗೆ ಸೋಲೆಂಬುದೇ ಇಲ್ಲ. ನಿಜವಾದ ಬದುಕಿನ ಮರ್ಮ ಅಡಗಿರುವುದೂ ಕ್ಷಣಿಕ. ಬಾಡಿಹೋಗುವ ಸೌಂದರ್ಯ, ಶಕ್ತಿ, ಯೌವನದಲ್ಲಿ ಅಲ್ಲ. ಇದನ್ನೂ ಮೀರಿ ಬದುಕಿನಲ್ಲಿ ಅನೇಕ ಮೌಲಿಕ ವಿಚಾರಗಳಿವೆ. ಅವುಗಳ ಅಳವಡಿಕೆಯಿಂದ ಮಾತ್ರ ನಾವು ಪರಿಪೂರ್ಣ ಮಾನವರಾಗಲು ಸಾಧ್ಯ ಎನ್ನುವುದನ್ನು ಅರಿತ ವ್ಯಕ್ತಿಯೇ ನಿಜಕ್ಕೂ ಧನ್ಯ. ಅಲ್ಲವೇ ಸಖಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಳ್ಳೇ ಹೆಸರು ತರೋಣಾಪ್ಪ!
Next post ಬಾಡದ ಹೂವು

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

cheap jordans|wholesale air max|wholesale jordans|wholesale jewelry|wholesale jerseys